
ನೆಲ್ಯಾಡಿ :ಯೇಸು ಕ್ರಿಸ್ತರು ತನ್ನ ಶಿಷ್ಯರ ಜೊತೆ ನಡೆಸಿದ ಕೊನೆಯ ಭೋಜನದ ನೆನಪನ್ನು ಸಾರುವ ಪವಿತ್ರ ಗುರುವಾರವನ್ನು ನೆಲ್ಯಾಡಿ ಬಾಲಯೇಸು ದೇವಾಲಯದಲ್ಲಿ ಆಚರಿಸಲಾಯಿತು.ಧರ್ಮಗುರುಗಳಾದ ವಂದನೀಯ ಫಾ ಗ್ರೇಶನ್ ಅಲ್ವಾರೀಸ್ 12 ಮಂದಿ ಪ್ರೇಷಿತರ ಪಾದಗಳನ್ನು ತೊಳೆಯುವ ಮೂಲಕ ಏಸುಕ್ರಿಸ್ತರು ಸಾರಿದ ದೀನತೆ ಹಾಗೂ ಪ್ರೀತಿಯ ಸಂದೇಶವನ್ನು ನೀಡಿದರು.ಅತಿಥಿ ಗುರುಗಳಾಗಿ ಆಗಮಿಸಿದ ವಂದನೀಯ ಫಾದರ್ ವಿನ್ಸೆಂಟ್ ಡಿಸೋಜಾ ಅವರು ಪ್ರವಚನದಲ್ಲಿ ದಿನದ ಮಹತ್ವವನ್ನು ತಿಳಿಸಿದರು ಹಾಗೂ ಪವಿತ್ರ ಆರಾಧನೆ ನಡೆಸಿಕೊಟ್ಟರು.
ಪವಿತ್ರ ಗುರುವಾರದ ವಿಶೇಷತೆ
ಯೇಸು ಸೆರೆಹಿಡಿಯಲ್ಪಟ್ಟು ಸಾಯುವ ಮೊದಲು ತನ್ನ ಅಪೊಸ್ತಲರೊಂದಿಗೆ ಕೊನೆಯ ಭೋಜನದ ಸಮಯದಲ್ಲಿ ಯೇಸು ತನ್ನ ದೇಹ ಮತ್ತು ರಕ್ತವನ್ನು ಸಂಕೇತಿಸುವ ಮೂಲಕ ರೊಟ್ಟಿ ಹಾಗೂ ದ್ರಾಕ್ಷರಸವನ್ನು ಹಂಚಿಕೊಂಡನು. ಇದು ಕ್ಯಾಥೋಲಿಕ್ ಚರ್ಚ್ನಲ್ಲಿ ಅತ್ಯಂತ ಪ್ರಾಚೀನ ಪದ್ಧತಿಗಳಲ್ಲಿ ಒಂದಾದ ಯೂಕರಿಸ್ಟ್ ಸ್ಥಾಪನೆಗೆ ಆಧಾರವಾಯಿತು. ಸೇವೆ ಮತ್ತು ನಮ್ರತೆಯ ಕ್ರಿಯೆಯಲ್ಲಿ, ಯೇಸು ತನ್ನ ಅಪೊಸ್ತಲರ ಪಾದಗಳನ್ನು ತೊಳೆದು, "ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು" ಎಂಬ ಹೊಸ ಆಜ್ಞೆಯನ್ನು ಅವರಿಗೆ ಕೊಟ್ಟನು.
